• By vjcuser
  • March 30, 2026

ಸಮಾಜಶಾಸ್ತ್ರ ಉಪನ್ಯಾಸಕರಿಗೆ ವಿದಾಯ ಸಮಾರಂಭ

ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ 30 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ  ಇಲಾಖೆ ನಿಯಮದಂತೆ ವಯೋ ನಿವೃತ್ತಿ ಹೊಂದಿದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಇವರನ್ನು ಕೋಟ ವಿದ್ಯಾ ಸಂಘ ಮತ್ತು ವಿವೇಕ ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗ ದ ಆಶ್ರಯದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷರಾದ  ಸಿ.ಎ. ಪಿ. ಪ್ರಭಾಕರಮಯ್ಯ ಇವರು ವಹಿಸಿ ನಿವೃತ್ತರ ಸೇವೆಯನ್ನು ಸ್ಮರಿಸಿಕೊಂಡರು. ಕಾರ್ಯದರ್ಶಿ  ಎಂ, ರಾಮದೇವ ಐತಾಳ್ ಇವರು ನಿವೃತ್ತರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಉಪನ್ಯಾಸಕ ಶ್ರೀ ಸಂಜೀವ ಜಿ, ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ ಇವರು ನಿವೃತ್ತರ ಕುರಿತಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.  ಶ್ರೀ ಅಶೋಕ್ ಕುಮಾರ್ ಶೆಟ್ಟಿ ಅವರು ಸನ್ಮಾನ ಸ್ವೀಕರಿಸಿ ತಮ್ಮ ಸೇವಾ ಜೀವನದ ಅನುಭವಗಳನ್ನು ಹಂಚಿಕೊಂಡರು. ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಇಂಗ್ಲಿಷ್ ಮೀಡಿಯಂ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ರೇಖಾ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ವಿದ್ಯಾ ಸಂಸ್ಥೆಗಳ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು. ಬಾಲಕರ ಪ್ರೌಢಶಾಲೆಯ ಮುಖ್ಯಸಹ ಶಿಕ್ಷಕ ಶ್ರೀ ಪ್ರೇಮಾನಂದ ವಂದಿಸಿ, ಶಿಕ್ಷಕಿ  ಶ್ರೀಮತಿ ರತಿ ಬಾಯಿ ಕಾರ್ಯಕ್ರಮ ನಿರೂಪಿಸಿದರು

Explore More
  • By vjcuser
  • March 30, 2026

‘ಸಂವಹನ ಕಲೆ ‘ ಕುರಿತಾಗಿ ಮಾಹಿತಿ ಕಾರ್ಯಕ್ರಮ

ಕೋಟ ವಿದ್ಯಾರ್ಥಿಗಳು ವಿದ್ಯಾಭ್ಯಾಸದ  ಜೊತೆ ಜೊತೆಗೆ  ಎಲ್ಲಿ ,ಹೇಗೆ ಮಾತನಾಡಬೇಕು ಸಮಯ, ಸಂದರ್ಭ ಮತ್ತು  ವ್ಯಕ್ತಿಗಳನ್ನು ನೋಡಿ ಮಾತನಾಡುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಬಿಡುವಿನ ವೇಳೆಯಲ್ಲಿ ಉತ್ತಮ ಲೇಖನಗಳನ್ನು ಪುಸ್ತಕಗಳನ್ನು  ಓದುವುದರ ಮೂಲಕ ವಿಷಯಜ್ಞಾನವನ್ನು ಸಂಪಾದಿಸಬೇಕು. ಭಾಷೆಗಳ ಬಗ್ಗೆ ವಿಶೇಷವಾದ ಗಮನ ಹರಿಸಿ ಹೆಚ್ಚೆಚ್ಚು ಭಾಷೆಗಳನ್ನು  ಕಲಿಯುವುದರಿಂದ ವ್ಯವಹರಿಸಲುಸಹಕಾರಿಯಾಗುತ್ತದೆ. ಧೃತಿಗೆಡದೆ ಧೈರ್ಯದಿಂದ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಲ್ಲಿ ಮುಂದೆ  ಉತ್ತಮ ವಾಗ್ಮಿ ಆಗಲು ಸಾಧ್ಯ , ಎಂದು ರೇಡಿಯೋ ಕುಂದಾಪುರ 89. 6FM ಇದರ ಕಾರ್ಯ ನಿರ್ವಾಹಕಿ ಶ್ರೀಮತಿ ಜ್ಯೋತಿ ಸಾಲಿಗ್ರಾಮ ತಿಳಿಸಿದರು. ಅವರು ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಏರ್ಪಡಿಸಿದ ಸಂವಹನ ಕಲೆ ಈ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.  ಕುಮಾರಿ ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿ,   ಸಂಘದ ಸಂಚಾಲಕ ಶ್ರೀ ಚಂದ್ರಶೇಖರ್ ಹೆಚ್ ಎಸ್ ವಂದಿಸಿದರು.

Explore More
  • By vjcuser
  • March 30, 2026

ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ

 ಕೋಟ  ವಿವೇಕ ಪದವಿಪೂರ್ವಕಾಲೇಜಿನ ಈ ಶೈಕ್ಷಣಿಕ ವರ್ಷದ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿನೆರವೇರಿತು. ಉದ್ಘಾಟಕರಾಗಿ, ಪ್ರೊ,ಬಾಲಕೃಷ್ಣ ಶೆಟ್ಟಿನಿವೃತ್ತ ಪ್ರಾಂಶುಪಾಲರು, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆಕಾಲೇಜು ಕಟೀಲು. ಇವರು ಆಗಮಿಸಿ ತಮ್ಮ ನುಡಿಮುತ್ತುಗಳ ಮೂಲಕ ಸಾಹಿತ್ಯ ಸಂಘವನ್ನುಉದ್ಘಾಟಿಸಿ ಮಾತನಾಡಿ ‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಸುಪ್ತ ಪ್ರತಿಭೆ ಇರುತ್ತದೆ ಅದನ್ನುವ್ಯಕ್ತಪಡಿಸಲು ಉತ್ತಮ ಲೇಖಕರ ಕೃತಿಗಳನ್ನುಓದಿ ಸರಿಯಾಗಿ ಅರ್ಥೈಸಿಕೊಂಡು ಕಥೆ ಕವನ, ಹನಿಗವನ ಲೇಖನಗಳನ್ನುಬರೆಯುವ ಅಭ್ಯಾಸ ವಿದ್ಯಾರ್ಥಿದೆಸೆಯಲ್ಲಿರೂಡಿಸಿಕೊಳ್ಳಬೇಕು, ಸಾಹಿತ್ಯವು ಮನುಷ್ಯ ಮನುಷ್ಯರ ನಡುವೆ ಸಹೃದಯತೆಯನ್ನುಮೂಡಿಸುತ್ತದೆ. ವಿದ್ಯಾರ್ಥಿಗಳು ಫೇಸ್ಬುಕ್, ವಾಟ್ಸಾಪ್ ಇನ್ಸಟಾ ಗ್ರಾಂ ಮುಂತಾದವುಗಳಲ್ಲಿವ್ಯರ್ಥವಾಗಿ ಸಮಯವನ್ನುಹಾಳು ಮಾಡುವುದರ ಬದಲು ಸಾಹಿತ್ಯದಲ್ಲಿಅಭಿರುಚಿಯನ್ನ ಬೆಳೆಸಿಕೊಂಡು ಹೃದಯವಂತರಾಗಬೇಕೆಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಜಗದೀಶ ನಾವುಡರು ಅತಿಥಿಗಳನ್ನುಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಭೂಮಿಕಾ ಕಾರ್ಯಕ್ರಮ ನಿರ್ವಹಿಸಿ ,ಉಪನ್ಯಾಸಕ ಶ್ರೀಸದಾಶಿವ ಹೊಳ್ಳ ವಂದಿಸಿದರು ಸಂಘದ ಸಂಚಾಲಕ ಶ್ರೀಚಂದ್ರಶೇಖರ ಎಚ್ಎಸ್ ಕಾರ್ಯಕ್ರಮ ಸಂಯೋಜಿಸಿದ್ದರು.

Explore More

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy