Category Archives: Viveka Girls High School

ಬೆಂಗಳೂರಿನಲ್ಲಿ ವಿವೇಕ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವ- ಜಾಗೃತಿ ಸಮಾವೇಶ

ಕೋಟ: ದಿನಾಂಕ 09-04-2023 ರಂದು ಬೆಂಗಳೂರಿನ ಬಸವನ ಗುಡಿಯ ಶ್ರೀ ಗುರುನರಸಿಂಹ ಕಲ್ಯಾಣಮಂಟಪದಲ್ಲಿ ವಿವೇಕ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವ- ಜಾಗೃತಿ ಸಮಾವೇಶವು ಅದ್ದೂರಿಯಾಗಿ ನಡೆಯಿತು.

ಸಭೆಯಲ್ಲಿ ವಿವೇಕದ ಅಭಿಮಾನಿಗಳು ಮತ್ತು ಹಿಂದಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭೆಯು ಸುಮಧುರ ಕ್ಷಣಗಳಿಗೆ ಸಾಕ್ಷಿಯಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅಮೃತ ಮಹೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಅವರ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ಉಪಾದ್ಯರು ವಹಿಸಿದ್ದರು, ವೇದಿಕೆಯಲ್ಲಿ. ಡಾ. ಮಾಧವ ಉಡುಪರು,ಡಾ.ಸುರೇಶ ಐತಾಳರು (Shekara Hospital Bangalore),ಡಾ.ಗಿರಿಧರ ಉಪಾದ್ಯರು, ಶ್ರೀ ರಮಾನಂದ ಭಟ್ಟರು ಉಪಸ್ಥಿತರಿದ್ದು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿನ ವಿದ್ಯಾರ್ಥಿ FM Radio Anchor ಶ್ರೀಮತಿ ರೇವತಿ ಶೆಟ್ಟಿ ಮಾಡಿದರು, ವಿವೇಕ ಬಾಲಕಿಯರ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಜಗದೀಶ ಹೊಳ್ಳರು ಧನ್ಯವಾದ ಅರ್ಪಿಸಿದರು.

ಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದ ಶ್ರೀಮತಿ ಕಲ್ಪನಾ, ಜಿ.ಶ್ರೀ ಶ್ರೀಧರ ಐತಾಳರು, ಶ್ರೀ ವಾಸುದೇವ ಅಡಿಗರು, ಶ್ರೀ ನವೀನರು, ಶ್ರೀ ರವೀಂದ್ರ ಉಪಾದ್ಯರು, ಶ್ರೀ ಡೆನಿಸ್ ಬಾಂಜಿ, ಶ್ರೀ ಸನತ್ ಕುಮಾರ್ ಬೆಂಗಳೂರು ಹಾಗು ಸಂಸ್ಥೆಯಾ ಉಪನ್ಯಾಸಕರು ಉಪಸ್ಥಿತರಿದ್ದರು.

ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತ ಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣ ಫಲಕ ಅನಾವರಣ ಸಮಾರಂಭ

ಕೋಟ : ಕೋಟ ವಿದ್ಯಾ ಸಂಘದ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಸ್ಥೆಗಳ ಅಮೃತಮಹೋತ್ಸವದ ಅಂಗವಾಗಿ ಅಮೃತಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣಾ ಫಲಕದ ಅನಾವರಣವು ಮಾ. 7ರಂದು ಕಾಲೇಜಿನ ಮಹತ್ಮಾಗಾಂಧಿ ಸ್ಮಾರಕ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಭ್ಯಾಗತರಾಗಿ ಆಂದ್ರಪ್ರದೇಶದ ಭಾರತೀಯ ತಂತ್ರಜ್ಞಾನ ಹಾಗೂ ವಿಜ್ಞಾನ ಆವಿಷ್ಕಾರ ವಿಶ್ವವಿದ್ಯಾನಿಲಯ ಸಹ ಕುಲಪತಿ , ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಕೆ.ನರಸಿಂಹ ನಕ್ಷತ್ರಿ ಇವರು ಆಗಮಿಸಿ ಶೀರ್ಷಿಕೆ ಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಶಿಸ್ತಿಗೆ ಆದ್ಯತೆಯನ್ನು ನೀಡಿದಲ್ಲಿ ಮುಂದಿನ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎನ್ನುವುದನ್ನು ವಿವೇಕ ವಿದ್ಯಾ ಸಂಸ್ಥೆ ತನ್ನನ್ನು ಸೇರಿಸಿಕೊಂಡಂತೆ ಅಸಂಖ್ಯಾತ ವಿದ್ಯಾರ್ಥಿಗಳ ಜೀವನದಲ್ಲಿ ಸಾಕ್ಷಾತ್ಕರಿಸಿ ಕೊಟ್ಟಿದೆ ಎಂದರು.

ಅತಿಥಿಯಾಗಿ ಭಾವಹಿಸಿದ ಕೋಟ ಸಿ.ಎ ಬ್ಯಾಂಕಿನ ಅಧ್ಯಕ್ಷ ತಿಮ್ಮ ಪೂಜಾರಿ ಅಮೃತಮಹೋತ್ಸವದ ಸಂಸ್ಮರಣ ಯೋಜನೆಗಳ ನಾಮಫಲಕವನ್ನು ಅನಾವರಣಗೊಳಿಸಿ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ವಿವೇಕ ವಿದ್ಯಾ ಸಂಸ್ಥೆಯ ಉದ್ದೇಶಿತ ಅಮೃತಮಹೋತ್ಸವದ ಯೋಜನೆಗಳೆಲ್ಲವೂ ಯಶಸ್ವಿಯಾಗಿ ಸಂಪನ್ನಗೊಳ್ಳಲ್ಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಟ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ. ಪ್ರಭಾಕರ ಮಯ್ಯ ವಹಿಸಿ, ಮಾತನಾಡಿ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ, ಈ ಉತ್ಸವವು ಕೇವಲ ವಿದ್ಯಾಸಂಘಗಳಿಗೆ ಮಾತ್ರ ಸಿಮೀತವಾಗಿರದೆ , ಹಿಂದಿನ ವಿದ್ಯಾರ್ಥಿಗಳ, ಇಂದಿನ ವಿದ್ಯಾರ್ಥಿಗಳ , ಇಲ್ಲಿ ಸೇವೆ ಸಲ್ಲಿಸಿದವರ , ಸೇವೆ ಸಲ್ಲಿಸುತ್ತಿರುವವರ , ವಿದ್ಯಾಭಿಮಾನಿಗಳ ಮಾತ್ರವಲ್ಲಾ ಊರಿನ ಉತ್ಸವ ಆಗಬೇಕೆಂದು ತಿಳಿಸಿದರು.

ವಿದ್ಯಾಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳ ಶುಭಶಂಶನೆಗೈದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಬಾಲಕಿಯರ ಪ್ರೌಡ ಶಾಲೆಯ ಮುಖ್ಯೋಪಧ್ಯಾಯ ಕೆ ಜಗದೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು , ಅಮೃತಮಹೋತ್ಸವದ ಸದಸ್ಯರು, ಹಿಂದಿನ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಧ್ಯಾಪಕ ನಾರಾಯಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಕೋಟ ವಿದ್ಯಾ ಸಂಘದ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಸ್ಥೆಗಳ ಅಮೃತಮಹೋತ್ಸವದ ಅಂಗವಾಗಿ ಅಮೃತಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣಾ ಫಲಕವನ್ನು ಆಂದ್ರಪ್ರದೇಶದ ಭಾರತೀಯ ತಂತ್ರಜ್ಞಾನ ಹಾಗೂ ವಿಜ್ಞಾನ ಆವಿಷ್ಕಾರ ವಿಶ್ವವಿದ್ಯಾನಿಲಯ ಸಹ ಕುಲಪತಿ ,ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಕೆ.ನರಸಿಂಹ ನಕ್ಷತ್ರಿ ಅನಾವರಣಗೊಳಿಸಿದರು.

ಕೋಟ- ವಿವೇಕ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಲಾಂಛನ,ಜ್ಞಾಪನಾ ಪತ್ರ ಅನಾವರಣ, ವಿವೇಕ ವಿದ್ಯಾಸಂಸ್ಥೆಯ ಸಾಧನೆ ಅಗಾಧ- ಆನಂದ್ ಸಿ ಕುಂದರ್

ಕೋಟ: ಕೋಟ ವಿವೇಕ ವಿದ್ಯಾಸಂಸ್ಥೆಯ 2023-2024ನೇ ಸಾಲಿನಲ್ಲಿ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುವ ಹಿನ್ನಲೆಯಲ್ಲಿ ಇದರ ಲಾಂಛನ,ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಬುಧವಾರ ಕಾಲೇಜಿನ ಮಹಾತ್ಮಗಾಂಧಿ ಸ್ಮಾರಕ ಸಭಾಭವನ ಇಲ್ಲಿ ನಡೆಯಿತು.

ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಕೋಟ ವಿವೇಕ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಾಧನೆ ಅಗಾಧ,ಇಲ್ಲಿ ಶಿಕ್ಷಣ ಪಡೆದ ಅದೆಷ್ಟೊ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿದ್ದಾರೆ. ಇದೊಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಕಂಗೊಳಿಸುತ್ತಿದೆ. ಸಂಸ್ಕಾರಭರಿತ, ಗುಣಮಟ್ಟದ ಶಿಕ್ಷಣ, ಶಿಸ್ತು ಈ ವಿದ್ಯಾದೇಗುಲದಲ್ಲಿ ರಾರಾಜಿಸುತ್ತಿದೆ. ಒರ್ವ ವಿದ್ಯಾರ್ಥಿ ಸಾಧನೆಯ ಹಿಂದೆ ಆ ಶಿಕ್ಷಣ ಸಂಸ್ಥೆಯ ಪಾಲು ಮಹತ್ತರ ಸ್ಥಾನ ನೀಡುತ್ತದೆ.ಪ್ರಸ್ತುತ ಅಮೃತಮಹೋತ್ಸವಕ್ಕೆ ಹಳೆ ವಿದ್ಯಾರ್ಥಿಗಳ ಕೊಡುಗೆ ಸಹಕಾರ ಬಹುಮುಖ್ಯವಾಗಿದೆ ಈ ದಿಸೆಯಲ್ಲಿ ನಾವೆಲ್ಲ ಇದರ ಯಶಸ್ಸಿಗೆ ಟೊಂಕಕಟ್ಟಿ ದುಡಿಯುವ ಎಂದರು.

ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಪಿ.ರಾಘವೇಂದ್ರ ಭಟ್ ಜ್ಞಾಪನಾಪತ್ರ ಅನಾವರಣಗೈದರು.
ವಿದ್ಯಾಸಂಘದ ಅಧ್ಯಕ್ಷ ಪಿ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂದ್ಥೆಯ,ಉಪಾಧ್ಯಕ್ಷರಾದ ಪಿ ಶ್ರೀಧರ ಉಪಾಧ್ಯ, ಜೊತೆಕಾರ್ಯದರ್ಶಿ ಮಂಜುನಾಥ ಉಪಾಧ್ಯ,ಕೋಶಾಧಿಕಾರಿ ವೇರಿಯನ್ ಮೇನೆಜಸ್ , ಸದಸ್ಯರಾದ ಭಾಸ್ಕರ್ ಹಂದೆ, ವಿವೇಕ ಭಾಲಕೀಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ಬಾಲಕರ ಪ್ರೌಢಶಾಲಾ ಮುಖ್ಯ ಸಹ ಶಿಕ್ಷಕ ವೆಂಕಟೇಶ ಉಡುಪ, ಆಂಗ್ಲ ಮಾಧ್ಯಮದ ಮುಖ್ಯಸ್ಥ ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ವಂದಿಸಿದರು. ಕಾರ್ಯಕ್ರವನ್ನು ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.

ಕೋಟ ವಿವೇಕ ವಿದ್ಯಾಸಂಸ್ಥೆಯ 2023-2024ನೇ ಸಾಲಿನಲ್ಲಿ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುವ ಹಿನ್ನಲೆಯಲ್ಲಿ ಇದರ ಲಾಂಛನ,ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್, ನಿವೃತ್ತ ಪ್ರಾಂಶುಪಾಲ ಪಿ.ರಾಘವೇಂದ್ರ ಭಟ್, ವಿದ್ಯಾಸಂಘದ ಅಧ್ಯಕ್ಷ ಸಿ.ಎ.ಪ್ರಭಾಕರ ಮಯ್ಯ, ಕಾಲೇಜಿನ ಪ್ರಾಂಶುಪಾಂಶುಪಾಲ ಕೆ.ಜಗದೀಶ ನಾವಡ ಇದ್ದರು.

ವಿವೇಕ ವಿದ್ಯಾಸಂಘ ವಾರ್ಷಿಕೋತ್ಸವ ಸಡಗರ

ಕೋಟ: ಜೀವನದಲ್ಲಿ ಅತ್ಯಮೂಲ್ಯವಾದ ಆಸ್ತಿ ಯಾವುದೆಂದರೆ ಅದು ಮಾತಾ,ಪಿತಾ,ಗುರುಗಳು, ಇವರುಗಳ ಭದ್ರ ತಳಹದಿಯಲ್ಲಿ ನಾವುಗಳು ಬಹು ಎತ್ತರಕ್ಕೆ ಬೆಳೆಯಲ್ಲಿ ಸಾಧ್ಯವಾಗಿದೆ ಎಂದು ಬೆಂಗಳೂರಿನ

ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಹೇಳಿದರು.
ಶುಕ್ರವಾರ ಕೋಟ ವಿವೇಕ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ಪದವಿಪೂರ್ವ  ಮಹಾವಿದ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ  ಜೀವನದಲ್ಲಿ ನಾವುಗಳು ಕಾಣಬೇಕಾದ ವಿಚಾರಗಳು ಎಂದರೆ ಅದು ಸಣ್ಣ ಸಂಗತಿಯನ್ನು ಅನುಭವಿಸಿ ಸಂಭ್ರಮಿಸುವುದು, ಅನುಕಂಪ, ಹಂಚಿ ತಿನ್ನುವ ಪ್ರವೃತ್ತಿ, ಹೃದಯ ವೈಶಾಲತೆ,  ಅಜಾತ ಶತ್ರುಗಳಾಗಿ  ಬದುಕುವ ಪರಿಯನ್ನು ಬೆಳೆಸಿಕೊಳ್ಳುವುದು ಇವೆಲ್ಲವು  ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತವೆ. ವಿದ್ಯಾರ್ಥಿ ಜೀವನವು ಸಹ ಅಷ್ಟೆ ಮೌಲ್ಯಯುತವಾಗಿ ಬೆಳೆಸಿಕೊಳ್ಳಬೇಕು.

ಇಲ್ಲಿನ ವಿವೇಕ ವಿದ್ಯಾಸಂಸ್ಥೆ ಇಡೀ ಶೈಕ್ಷಣಿಕ ಕ್ಷೇತ್ರಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ ಇಲ್ಲಿನ ಶಿಸ್ತು,ಶಿಕ್ಷಣದ ಗುಣಮಟ್ಟ ವಿದ್ಯಾರ್ಥಿಗಳನ್ನು ಬಹು ಎತ್ತರಕ್ಕೆ ಕೊಂಡ್ಯೊಯುತ್ತಿದೆ. ತಮ್ಮ ಜೀವನದಲ್ಲಿ ಆದರ್ಶ ಪುರುಷರ ಜೀವನವನ್ನು ಆಧಾರವಾಗಿಟ್ಡುಕೊಂಡು ಬದುಕಿ ಊರಿನ ಹೆಸರನ್ನು ಉತ್ತುಂಗಕ್ಕೆ ಎರಿಸಿ ಎಂದು ಕರೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ  ಪಿ ಪ್ರಭಾಕರ ಮಯ್ಯ ವಹಿಸಿದ್ದರು.

ಪ್ರಸೂತಿ ತಜ್ಞೆ  ಡಾ.ಅರುಂಧತಿ ರಾವ್, ಬೆಂಗಳೂರಿನ ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ  ಹಿಂದಿನ ಅಧ್ಯಕ್ಷ ರಮಾನಂದ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ ಉಪ ಮುಖಂಡ ಕೇಶವ ಉಪಾಧ್ಯ , ಶ್ರೀಶ ನಾಯಕ್ ವರದಿ ಮಂಡಿಸಿದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ನಿರೂಪಿಸಿದರು. ಹಿರಿಯ ಸಹಾಯಕ ಶಿಕ್ಷಕ ವೆಂಕಟೇಶ ಉಡುಪ ವಂದಿಸಿದರು.

ಕೋಟ ವಿವೇಕ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ಪದವಿಪೂರ್ವ  ಮಹಾವಿದ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಸೂತಿ ತಜ್ಞೆ  ಡಾ.ಅರುಂಧತಿ ರಾವ್, ಬೆಂಗಳೂರಿನ ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಹಿರಿಯ ಸಹಾಯಕ ಶಿಕ್ಷಕ ವೆಂಕಟೇಶ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ವಿವೇಕದಲ್ಲಿ ಶಿಕ್ಷಕರ ದಿನಾಚರಣೆ ‘ಗುರುವಂದನೆ-ಅಭಿವಂದನೆ’

“ಪ್ರತಿಯ್ಯೊಬ್ಬ ವಿದ್ಯಾರ್ಥಿಯಲ್ಲಿಯೂ ಸುಪ್ತವಾದ ಪ್ರತಿಭೆಯಿರುತ್ತದೆ. ಆ ಪ್ರತಿಭೆ ಕಲಾತ್ಮಕವಾಗಿ ಸಂಗೀತ, ಸಾಹಿತ್ಯ, ಅಭಿನಯ, ಕ್ರೀಡೆಗಳಿಂದ ಕೂಡಿರಬಹುದು. ಹೀಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅದನ್ನು ಪೆÇೀಷಿಸಿ, ವಿಕಸನಗೊಳ್ಳುವಂತೆ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಆದ್ದರಿಂದ ಅದರ ಪಾವಿತ್ರ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ತರಗತಿ ಪ್ರವೇಶಿಸುವ ಮುನ್ನ ಸಾಕಷ್ಟು ತಯಾರಿ ನಡೆಸಿರಬೇಕು. ವಿದ್ಯಾರ್ಥಿಗಳಲ್ಲಿ ಭೇದ-ಭಾವ ತೋರದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು” ಎಂದು ನಿವೃತ್ತ ವಾಣಿಜ್ಯಶಾಸ್ತ್ರ ಪೆÇ್ರಫೆಸರ್ ಶ್ರೀ ಗಣೇಶ್ ಭಟ್ ಇವರು ತಿಳಿಸಿದರು.ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಕೋಟ ವಿದ್ಯಾಸಂಘದ ಆಡಳಿತ ಮಂಡಳಿಯವರು ನಡೆಸುವ ಪರಿಸರದ ಪೆÇೀಷಕ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧ್ಯಾಪಕರ ಸಂಮ್ಮಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣವನ್ನು ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರು ವಹಿಸಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಸಮರ್ಪಣಾ ಭಾವದಿಂದ ಕರ್ತವ್ಯವನ್ನು ಮಾಡಿದಲ್ಲಿ ಶಿಕ್ಷಕ ಸ್ಥಾನಕ್ಕೆ ನಿಜವಾದ ಗೌರವ ದೊರಕುತ್ತದೆ ಎಂದು ತಿಳಿಸಿದರು.ಅಭ್ಯಾಗತರಾಗಿ ಶ್ರೀ ಆರ್. ಪ್ರಕಾಶ್, ಶಿಕ್ಷಣಾಧಿಕಾರಿಗಳು, ಬ್ರಹ್ಮಾವರ ವಲಯ ಇವರು ಮಾತನಾಡಿ, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿವೇಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು ಅಧ್ಯಾಪಕರ ಸಂಮ್ಮಾನ ಕಾರ್ಯಕ್ರಮ ನಡೆದುಕೊಂಡು ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ, ಶ್ರೀ ಎಂ. ರಾಮದೇವ ಐತಾಳ್, ಕೋಶಾಧಿಕಾರಿ ಶ್ರೀ ವಲೇರಿಯನ್ ಮೆನೇಜಸ್ ಶುಭ ಹಾರೈಸಿದರು.

ಶ್ರೀ ಶಾಂಭವಿ ಹಿ.ಪ್ರಾ.ಶಾಲೆ, ಕೋಟ ಇಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಶ್ರೀ ರಾಜರಾಮ ಐತಾಳ್, ಸ.ಹಿ.ಪ್ರಾ.ಶಾಲೆ, ಕಾರ್ಕಡ ಶಾಲೆಯ ನಿವೃತ್ತ ಸಹಶಿಕ್ಷಕಿ ಶ್ರೀಮತಿ ಲೀಲಾವತಿ, ಸ.ಹಿ.ಪ್ರಾ.ಶಾಲೆ, ಕೋಟತಟ್ಟು ಇಲ್ಲಿ ನಿವೃತ್ತರಾದ ಸಹಶಿಕ್ಷಕ ಶ್ರೀ ಸತೀಶ ಉಡುಪ ಇವರುಗಳನ್ನು ಸಂಸ್ಥೆಯ ವತಿಯಿಂದ ಸಂಮ್ಮಾನಿಸಲಾಯಿತು. ನಿವೃತ್ತರು ತಮ್ಮ ಸೇವಾಜೀವನದ ಅನುಭವವನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಸ್ವಾಗತಿಸಿದರು. ಶ್ರೀ ಶಂಭು ಭಟ್ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವೆಂಕಟೇಶ ಉಡುಪ, ಆಡಳಿತ ಮಂಡಳಿಯ ಸದಸ್ಯರು, ಬೋಧಕ ವರ್ಗದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರಮ್ಯಾ ನಿರೂಪಿಸಿದರು.

ವಿವೇಕ ವಿದ್ಯಾಸಂಸ್ಥೆಗಳಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆ

ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ವಿಪರೀತ ಮಳೆಯ ನಡುವೆ 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಕೆ.ಜಗದೀಶ ನಾವಡರು ಧ್ವಜಾರೋಹಣ ನೆರವೇರಿಸಿದರು. ಸಂಸ್ತೆಯ ಇತರ ಮುಖ್ಯಸ್ಥರಾದ ಶ್ರೀ ಕೆ. ಜಗದೀಶ್ ಹೊಳ್ಳ, ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವೆಂಕಟೇಶ ಉಡುಪ ಉಪಸ್ಥಿತರಿದ್ದರು.

 

 

 

 

ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿ ಯಿಂದ ಸನ್ಮಾನ

ಕು.ಪಲ್ಲವಿ,ವಿವೇಕ ಬಾಲಕಿಯರ ಪ್ರೌಢಶಾಲೆ,ಕೋಟ.ಇವಳಿಗೆ  2019ರ SSLC ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ 616ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಾಧನೆಗಾಗಿ ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ಜಿಲ್ಲಾಧಿಕಾರಿಗಳಿಂದ ಗೌರವಿಸಲಾಯಿತು

ಸಿ.ಎ. ಶಿಕ್ಷಣ ಮಾರ್ಗದರ್ಶನ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ
ವಿದ್ಯಾಥರ್ಿಗಳಿಗೆ ಚಾಟರ್ೆಡ್ ಅಕೌಂಟೆಂಟ್ನ ತಯಾರಿ ಮತ್ತು ಅದರ
ಪರೀಕ್ಷೆಗಳ ಕುರಿತಾಗಿ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಿ.ಎ.ಅಮರೀಷ್
ಹೊಳ್ಳ ಇವರು ಆಗಮಿಸಿ, ವಿದ್ಯಾಥರ್ಿಗಳಿಗೆ ಸಿ.ಎ. ಕುರಿತಾಗಿ
ಪೂರ್ವಭಾವಿಯಾಗಿ ಸಿದ್ಧತೆಯನ್ನು ಹೇಗೆ ನಡೆಸಬೇಕು ಮತ್ತು
ಅದರ ಪರೀಕ್ಷೆಗಳ ಬಗ್ಗೆ ವಿವರಿಸಿದರು.
ವಿದ್ಯಾಥರ್ಿಗಳು ಜೀವನದಲ್ಲಿ ನಿಖರವಾದ ಗುರಿಯನ್ನು ಹೊಂದಿ
ಅದರ ಬಗ್ಗೆ ನಿರಂತರ ಪ್ರಯತ್ನ ಮಾಡಿದರೆ ಯಶಸ್ವಿಯಾಗಲು
ಸಾಧ್ಯ ಎಂದು ತಿಳಿಸುತ್ತಾ ಸಿ.ಎ. ತಯಾರಿ ಪರೀಕ್ಷೆಗಳ ಬಗ್ಗೆ ತಮ್ಮ
ಅನುಭವವನ್ನು ಹಂಚಿಕೊಂಡರು.
ವಿಶೇಷವೆಂದರೆ ಸಂಪನ್ಮೂಲ ವ್ಯಕ್ತಿ ಶ್ರೀ ಅಮರೀಷ ಹೊಳ್ಳ
ವಿವೇಕ ವಿದ್ಯಾಸಂಸ್ಥೆಗಳಲ್ಲಿ ಸತತ ಐದು ವರ್ಷ ಅಧ್ಯಯನ ನಡೆಸಿ,
ಪ್ರಸ್ತುತ ಬೆಂಗಳೂರಿನಲ್ಲಿ ಸಿ.ಎ. ಯಾಗಿ ಕಾರ್ಯವನ್ನು
ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.
ಜಗದೀಶ ನಾವಡರು ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಪದ್ಮಿನಿ
ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀ ಸಂಜೀವ
ಜಿ. ಕಾರ್ಯಕ್ರಮ ಸಂಯೋಜಿಸಿದ್ದರು

ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ
ವಿದ್ಯಾರ್ಥಿ ಸಂಘದ ಉದ್ಘಾಟನೆಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿ ಸರಕಾರದ ಉದ್ಘಾಟಕರಾಗಿ, ಶ್ರೀ ವಾಸು ಮೊಗೇರ,
ರಾಜ್ಯಶಾಸ್ತ್ರ ಉಪನ್ಯಾಸಕರು, ಬ್ರಹ್ಮಾವರ ಸರಕಾರಿ ಪ.ಪೂ.ಕಾಲೇಜು,
ಇವರು ಆಗಮಿಸಿ ದೀಪವನ್ನು ಬೆಳಗಿಸುವುದರ ಮೂಲಕ
ಉದ್ಘಾಟಿಸಿದರು.
ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡಿ ಸಂಸತ್ತಿನ ರಚನೆ, ಆದರ
ಕಾರ್ಯ ವೈಖರಿ ಮತ್ತು ಅಲ್ಲಿ ಸ್ವೀಕರಿಸುವ ನಿರ್ಣಯಗಳ ಬಗ್ಗೆ ತಿಳಿಸಿ,
ವಿದ್ಯಾಥರ್ಿಗಳು ವಿದ್ಯಾಥರ್ಿ ಜೀವನದಲ್ಲೇ ಸಂಸತ್ತಿನ ಕುರಿತಾಗಿ
ತಿಳಿದುಕೊಳ್ಳಬೇಕು. ಶಾಲೆಯ ವಿದ್ಯಾಥರ್ಿ ಸರಕಾರದಲ್ಲಿ ನೀಡಿರುವ
ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇದರಿಂದ
ವಿದ್ಯಾಥರ್ಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು
ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು,
ವಾಕ್ಪತಿ, ಉಪವಾಕ್ಪತಿಯು ಸೇರಿದಂತೆ ಮಂತ್ರಿಮಂಡಲದ ಸದಸ್ಯರಿಗೆ
ಪ್ರಮಾಣ ವಚನ ಬೋಧಿಸಿದರು.
ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಶ್ರೀ ವೆಂಕಟೇಶ
ಉಡುಪರು ಶುಭ ಹಾರೈಸಿದರು.
ವಿದ್ಯಾಥರ್ಿ ಸರಕಾರದ ಮುಖ್ಯಮಂತ್ರಿ ರಿತೇಶ್ ಕುಂದರ್
ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಉಪಮುಖ್ಯಮಂತ್ರಿ ವಿಶಾಲ್ ಧನ್ಯವಾದವನ್ನಿತ್ತರು. ಕುಮಾರಿ
ಯಜುಷಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶ್ರೀ ಎ.
ಗಣೇಶಕುಮಾರ ಶೆಟ್ಟಿ ಮತ್ತು ಶಿಕ್ಷಕಿ ರತಿ ಬಾ ಕಾರ್ಯಕ್ರಮ
ಸಂಯೋಜಿಸಿದ್ದರು

ಆತ್ಮೀಯ ವಿದಾಯ ಸಮಾರಂಭ

ಕೋಟ : ವಿವೇಕ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿವೇಕ
ಬಾಲಕಿಯರ ಪ್ರೌಢಶಾಲೆಯಲ್ಲಿ ಪೇದೆಯಾಗಿ 41ವರ್ಷಗಳ ಕಾಲ
ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀ ಪಿ. ಬಸವ ಪೂಜಾರಿ
ಇವರನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ವಿದ್ಯಾಸಂಸ್ಥೆಗಳ
ಸಿಬ್ಬಂದಿ ವರ್ಗದ ಜಂಟಿ ಆಶ್ರಯದಲ್ಲಿ ಸಂಮ್ಮಾನಿಸಿ ಭಾವಪೂರ್ಣ
ವಿದಾಯವನ್ನು ಕೋರಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ
ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರವರು ವಹಿಸಿ,
ಮಾತನಾಡಿ, ಇಲಾಖಾ ನಿಯಮದಂತೆ ವಯೋನಿವೃತ್ತಿ ಸಹಜ, ಆದರೆ
ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಸಂಸ್ಥೆಗಳ ಕುರಿತಾಗಿ
ಸೇವಾ ಮನೋಭಾವದೊಂದಿಗೆ ಇದು ನನ್ನ ಸಂಸ್ಥೆ ಎಂಬ ವಿಶೇಷ
ಅಭಿಮಾನದೊಂದಿಗೆ ಸೇವೆಯನ್ನು ಸಲ್ಲಿಸಿದಲ್ಲಿ ನಮ್ಮ ಜೀವನ
ಸಾರ್ಥಕವಾಗುತ್ತದೆ. ಸಂಸ್ಥೆಗಳ ಬಗ್ಗೆ ಅಪಾರ ಅಭಿಮಾನ, ಪ್ರೀತಿ
ಹೆಚ್ಚುತ್ತದೆ ಎಂದು ತಿಳಿಸಿದರು.
ಅವರು ಪಿ. ಬಸವ ಪೂಜಾರಿಯವರ ಕರ್ತವ್ಯ, ಶ್ರದ್ಧೆ,
ತನ್ಮಯತೆಯನ್ನು, ಬದ್ಧತೆಯನ್ನು ಮುಕ್ತಕಂಠದಿಂದ
ಪ್ರಶಂಸಿದರು.
ವಿದ್ಯಾಸಂಘದ ಕೋಶಾಧಿಕಾರಿ, ಶ್ರೀ ವಲೇರಿಯನ್ ಮೇನೆಜಸ್
ಮತ್ತು ಜೊತೆ ಕಾರ್ಯದಶರ್ಿ ಶ್ರೀ ಎಂ.ರಾಮದೇವ ಐತಾಳರು
ನಿವೃತ್ತರ ಕರ್ತವ್ಯ ನಿಷ್ಟೆಯನ್ನು ಮೆಚ್ಚಿ ಮುಂದಿನ ಜೀವನಕ್ಕೆ
ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳ, ಶ್ರೀ
ಶ್ರೀಪತಿ ಹೇಳರ್ೆ, ಶ್ರೀ ವೆಂಕಟೇಶ ಉಡುಪರು ನಿವೃತ್ತರ ಕುರಿತಾಗಿ
ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು
ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಡಳಿತ
ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕಿ
ಶ್ರೀಮತಿ ಅನಿತಾ ಹೊಳ್ಳ ಪ್ರಾಥರ್ಿಸಿದರು. ಶಿಕ್ಷಕ ಶ್ರೀ ನರೇಂದ್ರ
ಕುಮಾರ್ ಕಾರ್ಯಕ್ರಮ ನಿರ್ವಹಿಸಿದರೆ, ಶ್ರೀ ಸಂಜೀವ ಜಿ. ಇವರು
ಧನ್ಯವಾದವನ್ನಿತ್ತರು