ವಿಜ್ಞಾನ ಸಂಘ ‘ವಿಶನ್’ನ ಉದ್ಘಾಟನೆ

ವಿವೇಕ ಪ.ಪೂ.ಕಾಲೇಜು, ಇದರ ವಿಜ್ಞಾನ ಸಂಘ ‘ವಿಶನ್’ನ ಉದ್ಘಾಟನೆಯನ್ನು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ|| ಎ.ಪಿ.ಭಟ್ರು ನೆರವೇರಿಸಿದರು.dsc_0745
ನಂತರ ಅವರು ‘ಇರುವುದೊಂದೇ ಭೂಮಿ’ ಎನ್ನುವ ವಿಷಯದಲ್ಲಿ ‘ಪವರ್ ಪಾಯಿಂಟ್ ಪ್ರೆಸೆಂಟೇಶನ್’ನ ಮೂಲಕ ವಿದ್ಯಾಥರ್ಿಗಳಿಗೆ ಉತ್ತಮವಾದ ಮಾಹಿತಿಯನ್ನು ನೀಡಿದರು. ಅವರು ಮಾತನಾಡುತ್ತಾ ಈ ಭೂಮಿಯ ಸೃಷ್ಟಿ ರಚನೆ, ಇದರ ವೈವಿಧ್ಯತೆ ಒಂದು ಅದ್ಭುತವಾಗಿದೆ. ಬ್ರಹ್ಮಾಂಡದಲ್ಲಿ ಸುಮಾರು ಗ್ರಹಗಳನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿ ‘ಭೂಮಿ’ ಅತ್ಯಂತ ಚಿಕ್ಕ ಗ್ರಹವಾಗಿದೆ. dsc_0747ಇದು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಸುಂದರ ಹಾಗು ಸೊಬಗಿನಿಂದ ಕೂಡಿದೆ. ನಮ್ಮ ಭೂಮಿಯ ರೀತಿಯ ವೈಶಿಶ್ಟ್ಯಮಯವಾದ, ವಾಸಯೋಗ್ಯ ಗ್ರಹ ಈ ಬ್ರಹ್ಮಾಂಡದಲ್ಲಿ ಮತ್ತೊಂದಿಲ್ಲ. ಇದರ ಸೃಷ್ಟಿಯೇ ಒಂದು ಅದ್ಭುತ ರೋಮಾಂಚನಗೊಳಿಸುತ್ತದೆ. ಇಂತಹ ಸುಂದರ ಭೂಮಿಯನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ಹಾಳು ಮಾಡುತ್ತಿದ್ದಾನೆ.  ಆದುದರಿಂದ ಇದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೆಚ್ಚು ಹೆಚ್ಚು ಸಸ್ಯರಾಶಿಗಳನ್ನು ಬೆಳೆಸಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.dsc_0752
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಕೆ.ಜಗದೀಶ ನಾವಡ ಅವರು ಗಣ್ಯರನ್ನು ಸ್ವಾಗತಿಸಿದರು. ವಿದ್ಯಾಥರ್ಿ ದಿನಕರ್ ಅವರು ವಿಜ್ಞಾನ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ವಿದ್ಯಾಥರ್ಿ ಸುನೀಲ್ ಅವರು ವಂದನಾರ್ಪಣೆಗೈದರು. ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ರವಿ ಕಾರಂತ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.