ವಿಜ್ಞಾನ ವಿಭಾಗದಲ್ಲಿ ವೈದೇಹಿ ವಿ. ಪೈ ಒಟ್ಟು 588 ಅಂಕವನ್ನು ಪಡೆದು ಪ್ರಥಮ ಸ್ಥಾನವನ್ನು, ಶ್ರೀನಿಧಿ 585 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ರಾಘವೇಂದ್ರ ಅಡಿಗ 584 ಅಂಕವನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ಅಧಿತಿ ವಿ.ಹೊಳ್ಳ 592 ಅಂಕ ಪಡೆದು ಪ್ರಥಮ ಸ್ಥಾನ, ನಿಶಾ ವೈಷ್ಣವ್ 591 ಅಂಕ ಪಡೆದು ದ್ವಿತಿಯ ಸ್ಥಾನ ಹಾಗೂ ಶೆರ್ಲಿ ಲೋಬೋ ಹಾಗು ಶ್ರೀವತ್ಸ ಉಡುಪ 587 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಆತ್ಮಿಕ ಶ್ರೀಯಾನ್ 579 ಅಂಕ ಪಡೆದು ಪ್ರಥಮ ಸ್ಥಾನ, ಮಾರಿಸೆಲ್ ಫರ್ನಾಂಡೀಸ್ 570 ಅಂಕ ಪಡೆದು ದ್ವಿತೀಯ ಸ್ಥಾನ ಹಾಗು ಅನನ್ಯ ಕೆ.ಎ. 541 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಸಭೆಯಲ್ಲಿ ವಿವೇಕದ ಅಭಿಮಾನಿಗಳು ಮತ್ತು ಹಿಂದಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭೆಯು ಸುಮಧುರ ಕ್ಷಣಗಳಿಗೆ ಸಾಕ್ಷಿಯಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅಮೃತ ಮಹೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಅವರ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ಉಪಾದ್ಯರು ವಹಿಸಿದ್ದರು, ವೇದಿಕೆಯಲ್ಲಿ. ಡಾ. ಮಾಧವ ಉಡುಪರು,ಡಾ.ಸುರೇಶ ಐತಾಳರು (Shekara Hospital Bangalore),ಡಾ.ಗಿರಿಧರ ಉಪಾದ್ಯರು, ಶ್ರೀ ರಮಾನಂದ ಭಟ್ಟರು ಉಪಸ್ಥಿತರಿದ್ದು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿನ ವಿದ್ಯಾರ್ಥಿ FM Radio Anchor ಶ್ರೀಮತಿ ರೇವತಿ ಶೆಟ್ಟಿ ಮಾಡಿದರು, ವಿವೇಕ ಬಾಲಕಿಯರ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಜಗದೀಶ ಹೊಳ್ಳರು ಧನ್ಯವಾದ ಅರ್ಪಿಸಿದರು.
ಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದ ಶ್ರೀಮತಿ ಕಲ್ಪನಾ, ಜಿ.ಶ್ರೀ ಶ್ರೀಧರ ಐತಾಳರು, ಶ್ರೀ ವಾಸುದೇವ ಅಡಿಗರು, ಶ್ರೀ ನವೀನರು, ಶ್ರೀ ರವೀಂದ್ರ ಉಪಾದ್ಯರು, ಶ್ರೀ ಡೆನಿಸ್ ಬಾಂಜಿ, ಶ್ರೀ ಸನತ್ ಕುಮಾರ್ ಬೆಂಗಳೂರು ಹಾಗು ಸಂಸ್ಥೆಯಾ ಉಪನ್ಯಾಸಕರು ಉಪಸ್ಥಿತರಿದ್ದರು.
]]>ಅತಿಥಿಯಾಗಿ ಭಾವಹಿಸಿದ ಕೋಟ ಸಿ.ಎ ಬ್ಯಾಂಕಿನ ಅಧ್ಯಕ್ಷ ತಿಮ್ಮ ಪೂಜಾರಿ ಅಮೃತಮಹೋತ್ಸವದ ಸಂಸ್ಮರಣ ಯೋಜನೆಗಳ ನಾಮಫಲಕವನ್ನು ಅನಾವರಣಗೊಳಿಸಿ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರುವಾಸಿಯಾದ ವಿವೇಕ ವಿದ್ಯಾ ಸಂಸ್ಥೆಯ ಉದ್ದೇಶಿತ ಅಮೃತಮಹೋತ್ಸವದ ಯೋಜನೆಗಳೆಲ್ಲವೂ ಯಶಸ್ವಿಯಾಗಿ ಸಂಪನ್ನಗೊಳ್ಳಲ್ಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಟ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ. ಪ್ರಭಾಕರ ಮಯ್ಯ ವಹಿಸಿ, ಮಾತನಾಡಿ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ, ಈ ಉತ್ಸವವು ಕೇವಲ ವಿದ್ಯಾಸಂಘಗಳಿಗೆ ಮಾತ್ರ ಸಿಮೀತವಾಗಿರದೆ , ಹಿಂದಿನ ವಿದ್ಯಾರ್ಥಿಗಳ, ಇಂದಿನ ವಿದ್ಯಾರ್ಥಿಗಳ , ಇಲ್ಲಿ ಸೇವೆ ಸಲ್ಲಿಸಿದವರ , ಸೇವೆ ಸಲ್ಲಿಸುತ್ತಿರುವವರ , ವಿದ್ಯಾಭಿಮಾನಿಗಳ ಮಾತ್ರವಲ್ಲಾ ಊರಿನ ಉತ್ಸವ ಆಗಬೇಕೆಂದು ತಿಳಿಸಿದರು.
ವಿದ್ಯಾಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳ ಶುಭಶಂಶನೆಗೈದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಬಾಲಕಿಯರ ಪ್ರೌಡ ಶಾಲೆಯ ಮುಖ್ಯೋಪಧ್ಯಾಯ ಕೆ ಜಗದೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು , ಅಮೃತಮಹೋತ್ಸವದ ಸದಸ್ಯರು, ಹಿಂದಿನ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಧ್ಯಾಪಕ ನಾರಾಯಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಕೋಟ ವಿದ್ಯಾ ಸಂಘದ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಸ್ಥೆಗಳ ಅಮೃತಮಹೋತ್ಸವದ ಅಂಗವಾಗಿ ಅಮೃತಮಹೋತ್ಸವದ ಶೀರ್ಷಿಕೆ ಗೀತೆ ಬಿಡುಗಡೆ ಮತ್ತು ಸಂಸ್ಮರಣಾ ಯೋಜನೆಗಳ ಪ್ರಕಟಣಾ ಫಲಕವನ್ನು ಆಂದ್ರಪ್ರದೇಶದ ಭಾರತೀಯ ತಂತ್ರಜ್ಞಾನ ಹಾಗೂ ವಿಜ್ಞಾನ ಆವಿಷ್ಕಾರ ವಿಶ್ವವಿದ್ಯಾನಿಲಯ ಸಹ ಕುಲಪತಿ ,ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಕೆ.ನರಸಿಂಹ ನಕ್ಷತ್ರಿ ಅನಾವರಣಗೊಳಿಸಿದರು.
]]>ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಕೋಟ ವಿವೇಕ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಾಧನೆ ಅಗಾಧ,ಇಲ್ಲಿ ಶಿಕ್ಷಣ ಪಡೆದ ಅದೆಷ್ಟೊ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿದ್ದಾರೆ. ಇದೊಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಕಂಗೊಳಿಸುತ್ತಿದೆ. ಸಂಸ್ಕಾರಭರಿತ, ಗುಣಮಟ್ಟದ ಶಿಕ್ಷಣ, ಶಿಸ್ತು ಈ ವಿದ್ಯಾದೇಗುಲದಲ್ಲಿ ರಾರಾಜಿಸುತ್ತಿದೆ. ಒರ್ವ ವಿದ್ಯಾರ್ಥಿ ಸಾಧನೆಯ ಹಿಂದೆ ಆ ಶಿಕ್ಷಣ ಸಂಸ್ಥೆಯ ಪಾಲು ಮಹತ್ತರ ಸ್ಥಾನ ನೀಡುತ್ತದೆ.ಪ್ರಸ್ತುತ ಅಮೃತಮಹೋತ್ಸವಕ್ಕೆ ಹಳೆ ವಿದ್ಯಾರ್ಥಿಗಳ ಕೊಡುಗೆ ಸಹಕಾರ ಬಹುಮುಖ್ಯವಾಗಿದೆ ಈ ದಿಸೆಯಲ್ಲಿ ನಾವೆಲ್ಲ ಇದರ ಯಶಸ್ಸಿಗೆ ಟೊಂಕಕಟ್ಟಿ ದುಡಿಯುವ ಎಂದರು.
ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಪಿ.ರಾಘವೇಂದ್ರ ಭಟ್ ಜ್ಞಾಪನಾಪತ್ರ ಅನಾವರಣಗೈದರು.
ವಿದ್ಯಾಸಂಘದ ಅಧ್ಯಕ್ಷ ಪಿ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂದ್ಥೆಯ,ಉಪಾಧ್ಯಕ್ಷರಾದ ಪಿ ಶ್ರೀಧರ ಉಪಾಧ್ಯ, ಜೊತೆಕಾರ್ಯದರ್ಶಿ ಮಂಜುನಾಥ ಉಪಾಧ್ಯ,ಕೋಶಾಧಿಕಾರಿ ವೇರಿಯನ್ ಮೇನೆಜಸ್ , ಸದಸ್ಯರಾದ ಭಾಸ್ಕರ್ ಹಂದೆ, ವಿವೇಕ ಭಾಲಕೀಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ಬಾಲಕರ ಪ್ರೌಢಶಾಲಾ ಮುಖ್ಯ ಸಹ ಶಿಕ್ಷಕ ವೆಂಕಟೇಶ ಉಡುಪ, ಆಂಗ್ಲ ಮಾಧ್ಯಮದ ಮುಖ್ಯಸ್ಥ ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ವಂದಿಸಿದರು. ಕಾರ್ಯಕ್ರವನ್ನು ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.
ಕೋಟ ವಿವೇಕ ವಿದ್ಯಾಸಂಸ್ಥೆಯ 2023-2024ನೇ ಸಾಲಿನಲ್ಲಿ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುವ ಹಿನ್ನಲೆಯಲ್ಲಿ ಇದರ ಲಾಂಛನ,ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್, ನಿವೃತ್ತ ಪ್ರಾಂಶುಪಾಲ ಪಿ.ರಾಘವೇಂದ್ರ ಭಟ್, ವಿದ್ಯಾಸಂಘದ ಅಧ್ಯಕ್ಷ ಸಿ.ಎ.ಪ್ರಭಾಕರ ಮಯ್ಯ, ಕಾಲೇಜಿನ ಪ್ರಾಂಶುಪಾಂಶುಪಾಲ ಕೆ.ಜಗದೀಶ ನಾವಡ ಇದ್ದರು.
]]>ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಹೇಳಿದರು.
ಶುಕ್ರವಾರ ಕೋಟ ವಿವೇಕ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ಪದವಿಪೂರ್ವ ಮಹಾವಿದ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಜೀವನದಲ್ಲಿ ನಾವುಗಳು ಕಾಣಬೇಕಾದ ವಿಚಾರಗಳು ಎಂದರೆ ಅದು ಸಣ್ಣ ಸಂಗತಿಯನ್ನು ಅನುಭವಿಸಿ ಸಂಭ್ರಮಿಸುವುದು, ಅನುಕಂಪ, ಹಂಚಿ ತಿನ್ನುವ ಪ್ರವೃತ್ತಿ, ಹೃದಯ ವೈಶಾಲತೆ, ಅಜಾತ ಶತ್ರುಗಳಾಗಿ ಬದುಕುವ ಪರಿಯನ್ನು ಬೆಳೆಸಿಕೊಳ್ಳುವುದು ಇವೆಲ್ಲವು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತವೆ. ವಿದ್ಯಾರ್ಥಿ ಜೀವನವು ಸಹ ಅಷ್ಟೆ ಮೌಲ್ಯಯುತವಾಗಿ ಬೆಳೆಸಿಕೊಳ್ಳಬೇಕು.
ಇಲ್ಲಿನ ವಿವೇಕ ವಿದ್ಯಾಸಂಸ್ಥೆ ಇಡೀ ಶೈಕ್ಷಣಿಕ ಕ್ಷೇತ್ರಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ ಇಲ್ಲಿನ ಶಿಸ್ತು,ಶಿಕ್ಷಣದ ಗುಣಮಟ್ಟ ವಿದ್ಯಾರ್ಥಿಗಳನ್ನು ಬಹು ಎತ್ತರಕ್ಕೆ ಕೊಂಡ್ಯೊಯುತ್ತಿದೆ. ತಮ್ಮ ಜೀವನದಲ್ಲಿ ಆದರ್ಶ ಪುರುಷರ ಜೀವನವನ್ನು ಆಧಾರವಾಗಿಟ್ಡುಕೊಂಡು ಬದುಕಿ ಊರಿನ ಹೆಸರನ್ನು ಉತ್ತುಂಗಕ್ಕೆ ಎರಿಸಿ ಎಂದು ಕರೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ ಪ್ರಭಾಕರ ಮಯ್ಯ ವಹಿಸಿದ್ದರು.
ಪ್ರಸೂತಿ ತಜ್ಞೆ ಡಾ.ಅರುಂಧತಿ ರಾವ್, ಬೆಂಗಳೂರಿನ ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಹಿಂದಿನ ಅಧ್ಯಕ್ಷ ರಮಾನಂದ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ ಉಪ ಮುಖಂಡ ಕೇಶವ ಉಪಾಧ್ಯ , ಶ್ರೀಶ ನಾಯಕ್ ವರದಿ ಮಂಡಿಸಿದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ನಿರೂಪಿಸಿದರು. ಹಿರಿಯ ಸಹಾಯಕ ಶಿಕ್ಷಕ ವೆಂಕಟೇಶ ಉಡುಪ ವಂದಿಸಿದರು.
ಕೋಟ ವಿವೇಕ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ಪದವಿಪೂರ್ವ ಮಹಾವಿದ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಸೂತಿ ತಜ್ಞೆ ಡಾ.ಅರುಂಧತಿ ರಾವ್, ಬೆಂಗಳೂರಿನ ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಹಿರಿಯ ಸಹಾಯಕ ಶಿಕ್ಷಕ ವೆಂಕಟೇಶ ಉಡುಪ ಮತ್ತಿತರರು ಉಪಸ್ಥಿತರಿದ್ದರು.
]]>ವಿದ್ಯಾರ್ಥಿಗಳಾದ ಅನಿರುದ್ಧ, ಧನುಷ್ ಮತ್ತು ವಿನಾಯಕ ಇವರು ಸಿಎನ್ಸಿ ರೈಟಿಂಗ್ ಮೆಷಿನ್ ಪೆÇ್ರಜೆಕ್ಟ್ಗೆ ಪ್ರಥಮ ಸ್ಥಾನ ಹಾಗೆಯೇ ಶ್ರವಣ, ಮನೀಷ್ ಇವರು ತಯಾರಿಸಿದ ಮಾದರಿ`ಆಕ್ಸಿಡೆಂಟ್ಡಿಟೆಕ್ಷನ್ ಸಿಸ್ಟಮ್ಗೆ ತೃತೀಯ ಸ್ಥಾನ ಸೇರಿದಂತೆ ರೋಹಿತ್, ವಿದ್ವತ್ ಪ್ರಥಮ ಸಮಾಧಾನಕರ ಬಹುಮಾನ, ಸೋಹನ್, ವಿನ್ಯಾಸ್ ಕಾರಂತ್ ಮತ್ತು ಮನ್ವಿತ್ ಇವರಿಗೆ ದ್ವಿತೀಯ ಸಮಾಧಾನಕರ ಬಹುಮಾನ, ಜೀವನ್, ಸುಮುಖ, ಅಕ್ಷಯ ಶಾಸ್ತ್ರೀ, ವಸಂತತಂಡಕ್ಕೆತೃತೀಯಸಮಾಧಾನಕರ ಬಹುಮಾನ ಹಾಗು ಆದರ್ಶ ಮತ್ತು ಶ್ರೇಯಸ್ ಆರಾಧ್ಯ ಇವರಿಗೆ ಚತುರ್ಥ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಸಹ್ಯಾದ್ರಿ ಸೈನ್ಸ್ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡರು.
]]>ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಸಂಸತ್ನಕಾರ್ಯ ಕಲಾಪ, ಮಸೂದೆ ಮಂಡನೆ, ಅನುಮೋದನೆ ಮುಂತಾದಕಾರ್ಯ ವೈಖರಿಯನ್ನು ತಿಳಿದುಕೊಳ್ಳಬೇಕು. ತನ್ಮೂಲಕ ಭವಿಷ್ಯದಲ್ಲಿಉತ್ತಮ ನಾಯಕನ ಗುಣಗಳನ್ನು ಬೆಳೆಸಿಕೊಳ್ಳಬಹುದು. ಸಂಸತ್ನಲ್ಲಿ ನಡೆಯುವ ಒಳ್ಳೆಯ ಘಟನೆಗಳನ್ನು ಸ್ವೀಕರಿಸಬೇಕೆಂದು ತಿಳಿಸಿದರು.
ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು ಒಳ್ಳೆಯ ವಾಕಪಟುತ್ವ, ನಿತ್ಯ ನಿಷ್ಠೆ, ಕರ್ತವ್ಯ ಪ್ರಜ್ಞೆಯನ್ನು ಹೊಂದಬೇಕೆಂದು ವಿವರಿಸಿದರು. ಮುಖ್ಯ ಅತಿಥಿಯಾಗಿ ಕೊಟತಟ್ಟುಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ಭಾಸ್ಕರ ಆಚಾರ್ಯ ಹಾಗು ಹಿರಿಯ ಶಿಕ್ಷಕರಾದ ಪ್ರೇಮಾನಂದ, ಉಪನ್ಯಾಸಕ ದಯಾನಂದ ಉಪಸ್ಥಿತರಿದ್ದರು.
ಯುವ ಸಂಸತ್ ಸ್ಪರ್ಧೆಯಲ್ಲಿತೀರ್ಪುಗಾರರಾಗಿ ಸರಕಾರಿ ಪ್ರಥಮದರ್ಜೆಕಾಲೇಜಿನಸಹಾಯಕ ಪ್ರಾಧ್ಯಾಪಕ ಪಾಂಡುರಂಗ, ಶಿಕ್ಷಕ ನರೇಂದ್ರಕುಮಾರ್, ಶಿಕ್ಶಕಿ ರತಿ ಬಾೈ ಇವರು ಸಹಕರಿಸಿದ್ದರು. ಮಧ್ಯಾಹ್ನದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರುಗಳಿಗೆ ಪ್ರಶಸ್ತಿ ಪತ್ರ ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಸ್ಥಾನದಲ್ಲಿ ಲಕ್ಷ್ಮಿಕಾಂತ, ಸ.ಪ.ಪೂ.ಕಾಲೇಜು, ಉಡುಪಿ, ದ್ವಿತೀಯ ಸ್ಥಾನದಲ್ಲಿಅನಂತಕೃಷ್ಣ ನಾವಡ, ವಿವೇಕ ಪ.ಪೂಕಾಲೇಜು, ಕೋಟ, ತೃತೀಯ ಸ್ಥಾನದಲ್ಲಿ ಸುಜಯ ಶೆಟ್ಟಿ, ಸ.ಪ.ಪೂ.ಕಾಲೇಜು, ಕುಂದಾಪುರ, ಚತುರ್ಥ ಸ್ಥಾನದಲ್ಲಿ ಶ್ರೀನಿಧಿ, ವಿವೇಕ ಪ.ಪೂ.ಕಾಲೇಜು, ಕೋಟ, ಪಂಚಮ ಸ್ಥಾನದಲ್ಲಿ ಪ್ರಣತಿ ವೈ.ಪಿ., ವಿವೇಕ ಪ.ಪೂ.ಕಾಲೇಜು, ಕೋಟಇವರುಆಯ್ಕೆಯಾದರು.
ತರಬೇತುದಾರರಾಗಿ ಉಪನ್ಯಾಸಕ ದಯಾನಂದ, ವಾಸು ಮೊಗೇರ ಬ್ರಹ್ಮಾವರ, ಪ್ರಕಾಶ ಗೋಳಿಯಂಗಡಿ, ರಾಘವೇಂದ್ರ ಬಿದ್ಕಲ್ಕಟ್ಟೆ, ಪರಮೇಶ್ವರ ಉಡುಪಿ, ಸಂಧ್ಯಾ ನಾಯಕ್ಕುಂದಾಪುರ, ಸುನಂದಾ ಕೆ ತೆಕ್ಕಟ್ಟೆ ಇವರು ಸಹಕರಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಚಂದ್ರಶೇಖರ ಎಚ್.ಎಸ್. ಕಾರ್ಯಕ್ರಮ ನಿರೂಪಿಸಿ ಕೃಷ್ಣ ವಂದಿಸಿದರು.
ಸಂಸದೀಯ ವ್ಯವಹಾರಗಳ ಇಲಾಖೆ ಹಾಗು ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಇವರ ಸಹಯೋಗದಲ್ಲಿ ಆಡಳಿತ ಮಂಡಳಿ, ಕೋಟ ವಿದ್ಯಾಸಂಘ ಮತ್ತು ವಿವೇಕ ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿಕಾಲೇಜಿನ ಸಭಾಂಗಣದಲ್ಲಿಯುವ ಸಂಸತ್ ಸ್ಪರ್ಧೆಯನ್ನು ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ, ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಮತ್ತಿತರರು ಉಪಸ್ಥಿತರಿದ್ದರು.
]]>ಕೋಟ: ವಿದ್ಯಾರ್ಥಿ ಜೀವನವೇ ವಿದ್ಯಾರ್ಥಿಯ ಭವಿಷ್ಯದ ಭದ್ರ ಬುನಾದಿಗೆ ನಾಂದಿ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.
ಸೋಮವಾರ ಕೋಟ ವಿವೇಕ ವಿದ್ಯಾಸಂಸ್ಥೆಯ ಫ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಅಸೆಂಬ್ಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳ ತಮ್ಮ ಜೀವನದಲ್ಲಿ ಅನುಸರಿಸಬೇಕಾದ ನೈಜ ಬದುಕಿನ ಕಾಯಕ ,ಸಾಧನೆಯ ಮಜಲುಗಳ ದಾರಿ ,ಪರೀಕ್ಷೆ ಎದುರಿಸಲು ಬೇಕಾದ ದೃಢತೆ ಈ ಕುರಿತಂತೆ ಮಾಹಿತಿ ನೀಡಿದರಲ್ಲದೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಸಮಾಜ ,ಹಸಿರು ವಾತಾವರಣ ಸೃಷ್ಠಿಸುವ ಬಗ್ಗೆ ಸಮರ್ಪಕ ಮಾಹಿತಿ ನೀಡಿ, ಅತಿ ಹೆಚ್ಚು ಮೊಬೈಲ್ ಬಳಕೆಯಿಂದದಾಗುವ ಸಮಸ್ಯೆಗಳು,ಮಾದಕ ವ್ಯಸನದಿಂದ ದೂರವಿರಲು ಮಾರ್ಗೋಪಾಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವತಿಯಿಂದ ರವೀಂದ್ರ ಕೋಟ ಇವರನ್ನು ಗೌರವಿಸಲಾಯಿತು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಹಮ್ಮಿಕೊಂಡಜಿಲ್ಲಾಮಟ್ಟದ ಕಂಠ ಶ್ಲೋಕ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ನಿಧೀಶ್ ಭಟ್ ಇವರನ್ನು ಗೌರವಿಸಲಾಯಿತು. ಪಂಚವರ್ಣ ಪರಿಸರಸ್ನೇಹಿ ಅಭಿಯಾನದಲ್ಲಿ ಭಾಗವಹಿಸಿದ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಈ ವೇಳೆ ಅಭಿನಂದಿಸಲಾಯಿತು.
ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ವೆಂಕಟೇಶ ಉಡುಪ,ಶಿಕ್ಷಕರಾದ ಶಂಭು ಭಟ್, ಬಾಲಕೃಷ್ಣ ನಕ್ಷತ್ರಿ,ದೈಹಿಕ ಶಿಕ್ಚಕ ಗಣೇಶ್ ಶೆಟ್ಟಿ, ರತಿ ಬಾೈ, ನಾಗರತ್ನ, ನಳೀನಾಕ್ಷಿ, ಶ್ಯಾಮಲ ಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಮುಖಂಡ ಕೇಶವ ಉಪಾಧ್ಯ ನಿರ್ವಹಿಸಿದರು.
ಸೋಮವಾರ ಕೋಟ ವಿವೇಕ ವಿದ್ಯಾಸಂಸ್ಥೆಯ ಫ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಅಸೆಂಬ್ಲಿಯಲ್ಲಿ ಪತ್ರಕರ್ತ ರವೀಂದ್ರ ಕೋಟ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ವೆಂಕಟೇಶ ಉಡುಪ,ಶಿಕ್ಷಕರಾದ ಶಂಭು ಭಟ್, ಬಾಲಕೃಷ್ಣ ನಕ್ಷತ್ರಿ ಮತ್ತಿತರರರು ಇದ್ದರು.
]]>