ಶಾಲಾ ಸಂಸತ್ತಿನ ಉದ್ಘಾಟನೆ

ಭಾರತ, ಜಗತ್ತಿನಲ್ಲಿ ವಿಶಾಲವಾದ ಪ್ರಜಾಪ್ರಭುತ್ವವನ್ನು ಹೊಂದಿರುವ ಏಕೈಕ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ನಮ್ಮ ದೇಶದ ‘ಸಂಸತ್’ ಒಂದು ಪ್ರಮುಖವಾದ ಅಂಗ. ಸಂಸತ್ ಎನ್ನುವುದು ಒಂದು ದೇಶದ ಹೃದಯ ಭಾಗವೇ ಆಗಿರುತ್ತದೆ. ಇಲ್ಲಿ ಸ್ವೀಕರಿಸುವ ನಿರ್ಣಯಗಳು, ಆಡಳಿತ ಸೂತ್ರಗಳು ಹಾಗು ಶಾಸನಗಳು ನಮ್ಮ ದೇಶವನ್ನು ಪ್ರಗತಿ ಪಥಕ್ಕೆ ಕೊಂಡೈಯುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಆದ್ದರಿಂದ ವಿದ್ಯಾಥರ್ಿಗಳು ತಮ್ಮ ವಿದ್ಯಾಥರ್ಿ ಜೀವನದಲ್ಲೇ ಸಂಸತ್ತಿನ ಬಗ್ಗೆ ತಿಳಿಯುವಂತೆ ಆಗಬೇಕೆಂದು ಸರಕಾರಿ ಪ.ಪೂ.ಕಾಲೇಜು, ಗೋಳಿಯಂಗಡಿ ಇಲ್ಲಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಪ್ರಕಾಶ್ ಇವರು ತಿಳಿಸಿದರು.img_8537
ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಹಾಗೂ ಪ್ರೌಢಶಾಲಾ ವಿಭಾಗದ 2016-17ನೇ ಸಾಲಿನ ವಿದ್ಯಾಥರ್ಿ ಸಂಸತ್ತನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು. ದೇಶದ ಸಂಸತ್ತಿನ ರಚನೆ, ಸದಸ್ಯರ ಆಯ್ಕೆ, ಅಲ್ಲಿ ನಡೆಯುವ ವಿಧಿ ವಿಧಾನಗಳನ್ನು ವಿದ್ಯಾಥರ್ಿಗಳು ತಿಳಿಯಬೇಕು. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂಸತ್ತಿನ ಆಗು-ಹೋಗುಗಳ ಬಗ್ಗೆ ಜನರಲ್ಲಿ ಆಳವಾಗಿ ಬೇರೂರಲು ಸಹಕಾರಿಯಾಗಿರುತ್ತದೆ. ಕೆಲವರ ಪ್ರಕಾರ ವಿದ್ಯಾಥರ್ಿಗಳು ರಾಜಕೀಯದಿಂದ ದೂರವಿರಬೆಕು ಎಂಬ ಸಲಹೆ ಇದೆ. ಆದರೆ ಇಂದಿನ ವ್ಯವಸ್ಥೆಯಲ್ಲಿ ವಿದ್ಯಾಥರ್ಿಗಳು ಸಂಸತ್ತಿನ ಸಂಪೂರ್ಣ ಮಾಹಿತಿಯನ್ನು ತಿಳಿದು ಉತ್ತಮ ಮಾರ್ಗದರ್ಶನ ಪಡೆದರೆ ಭವಿಷ್ಯದಲ್ಲಿ ಅತ್ಯುತ್ತಮ ನಾಯಕರಾಗಲು ಸಾಧ್ಯ ಎಂದು ತಿಳಿಸಿದರು. ವಿದ್ಯಾಥರ್ಿ ಜೀವನದಲ್ಲಿ ನಾಯಕತ್ವ ಗುಣಗಳನ್ನು ಹಾಗು ಸಮಾಜ ಸೇವಾ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆಯಿತ್ತರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವುಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಲಾ ರಾಜ್ಯದ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು. ಹಾಗೆಯೇ ವಿದ್ಯಾಥರ್ಿಗಳು ಜೀವನದಲ್ಲಿ ರಚನಾತ್ಮಕ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಯಕರಾಗಬೇಕೆಂದು ಕರೆ ನೀಡಿದರು.
ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ವೆಂಕಟೇಶ ಉಡುಪರು ಶುಭಾಶಂಸನೆಗೈದರು. ವಿದ್ಯಾಥರ್ಿ ನಾಯಕ ಕುಮಾರ ವಿನೀತ್ ಭಟ್ ಸ್ವಾಗತಿಸಿದರು. ವಿದ್ಯಾಥರ್ಿ ಉಪಮುಖಂಡ ಸ್ವಸ್ತಿಕ್ ಭಂಡಾರಿ ಧನ್ಯವಾದವನ್ನಿತ್ತರು. ವಿದ್ಯಾಥರ್ಿ ನಾಯಕಿ ಕುಮಾರಿ ಪರಿಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಶ್ರೀ ಗಣೇಶ್ ಕುಮಾರ್ ಶೆಟ್ಟಿ, ಶಿಕ್ಷಕಿ ರತಿ ಬಾ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

–    ಚಂದ್ರಶೇಖರ್ ಎಚ್.ಎಸ್.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter